27.11.21ರ ಬೆಳಿಗ್ಗೆ 8 ಗಂಟೆವರೆಗಿನ ಹವಾಮಾನ ಮುನ್ಸೂಚೆನೆ :
ದಕ್ಷಿಣ ಕನ್ನಡ, ಕೊಡಗು, ಚಾಮರಾಜನಗರ, ಮೈಸೂರು ಭಾಗಗಳಲ್ಲಿ ಅಲ್ಲಲ್ಲಿ ಸ್ವಲ್ಪ ಮೋಡದ ವಾತಾವರಣದ ಮುನ್ಸೂಚೆನೆ ಇದೆ. ಉಳಿದ ಕರ್ನಾಟಕದ ಹೆಚ್ಚಿನ ಭಾಗಗಳಲ್ಲಿ ಬಿಸಿಲಿನ ವಾತಾವರಣದ ಮುನ್ಸೂಚೆನೆ ಇದೆ.
ಇವತ್ತು ಮಳೆಯ ಮುನ್ಸೂಚೆನೆ ಎಲ್ಲಿಯೂ ಇರುವುದಿಲ್ಲ.
ವಾಯುಭಾರ ಕುಸಿತ : 28, 29ರಂದು ಅಂಡಮಾನ್ ಮೂಲಕ ಹಾದುಬರಲಿರುವ ವಾಯುಭಾರ ಕುಸಿತವು ಡಿಸೆಂಬರ್ 2,3 ರ ಅಂದಾಜಿಗೆ ಉತ್ತರ ಆಂದ್ರಾ ಹಾಗೂ ಒಡಿಸ್ಸಾ ಕರಾವಳಿಗೆ ಅಪ್ಪಳಿಸುವ ಮುನ್ಸೂಚನೆ ಇದೆ.
ಕರ್ನಾಟಕಕ್ಕೆ ಅಷ್ಟೇನು ಪರಿಣಾಮ ಇರದಿದ್ದರೂ ರಾಜ್ಯದ ದಕ್ಷಿಣ ಭಾಗಗಳಲ್ಲಿ ಅಲ್ಲಲ್ಲಿ ಸಾಧಾರಣ ಮಳೆಯ ಮುನ್ಸೂಚೆನೆ ಇದೆ. ಡಿಸೆಂಬರ್ 2 ಅಥವಾ 3 ನೇ ತಾರೀಕಿನ ನಂತರ ರಾಜ್ಯದಾದ್ಯಂತ ಬಿಸಿಲಿನ ವಾತಾವರಣದ ಸಾಧ್ಯತೆ ಇದೆ.
No comments:
Post a Comment